ಸಸಿ ನೆಡುವ ಮೂಲಕ ಸರಳವಾಗಿ ಹುಟ್ಟು ಆಚರಿಸಿಕೊಂಡ ನಿವೃತ್ತ ಅಂಚೆ ಇಲಾಖೆ ನೌಕರ ಪೋಸ್ಟ್ ಮ್ಯಾನ್ ಮಹಾದೇವ ಮಾದಿಗ

ಹುಕ್ಕೇರಿ: ತಾಲೂಕಿ ಹೊನ್ನಿಹಳ್ಳಿ ಗ್ರಾಮದಲ್ಲಿ ಶ್ರೀ ಮಹಾದೇವ ಸಾತಪ್ಪಾ ಮಾದಿಗ ಅವರು ಅಂಚೆ ಇಲಾಖೆಯಲ್ಲಿ 40 ವರ್ಷಗಳ ಕಾಲ ಅತ್ಯಂತ ದಕ್ಷತೆ, ಪ್ರಾಮಾಣಿಕತೆ ಹಾಗೂ ಸತ್ಯ-ನ್ಯಾಯ-ನೀತಿಯಿಂದ ಸೇವೆ ಸಲ್ಲಿಸಿ ಸುತ್ತಮುತ್ತಲಿನ ಹಳ್ಳಿಗಳ ಜನರ ಮನ ಗೆದ್ದಿದ್ದ ನಿವೃತ್ತ ಪೋಸ್ಟ್‌ಮ್ಯಾನ್ ಅವರು ತಮ್ಮ 71ನೇ ವರ್ಷದ ಹುಟ್ಟುಹಬ್ಬವನ್ನು ಸಸಿ ನೆಡುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.

​ಐದು ವರ್ಷಗಳ ಹಿಂದೆ ನಿವೃತ್ತರಾದ ಇವರು, ತಮ್ಮ ಸುದೀರ್ಘ ಸೇವಾವಧಿಯಲ್ಲಿ ಸುತ್ತಮುತ್ತಲಿನ 15 ಹಳ್ಳಿಗಳಲ್ಲಿ ಮನೆಮಾತಾಗಿದ್ದರು. ಕರ್ತವ್ಯ ನಿಷ್ಠೆಯನ್ನು ಮೆಚ್ಚಿ ಇಲಾಖೆಯಲ್ಲಿ ಹಲವು ಬಡ್ತಿಗಳು (ಪ್ರಮೋಷನ್) ಬಂದಿದ್ದರೂ, ತಾನು ಹುಟ್ಟಿದ ಊರು, ಹೆತ್ತ ತಂದೆ-ತಾಯಿ ಹಾಗೂ ತಾಯಿ ಸಮಾನ ಕೃಷಿ ಕಾಯಕವೇ ತನ್ನ ಜೀವ ಎಂದು ನಂಬಿ, ಬಂದ ಬಡ್ತಿಗಳನ್ನೆಲ್ಲ ನಿರಾಕರಿಸಿ ಸ್ವಗ್ರಾಮದಲ್ಲೇ ಸೇವೆ ಮುಂದುವರಿಸಿದ ಅಪರೂಪದ ಸರಳ ಜೀವ ಇವರಾಗಿದ್ದಾರೆ.

​ಕೃಷಿಯೇ ಜೀವ - ತುಂಬಿದ ಕುಟುಂಬದೊಂದಿಗೆ ಬದುಕು:

‌ ಬಿಡುವಿನ ವೇಳೆಯಲ್ಲಿ ವ್ಯವಸಾಯ ಮಾಡುತ್ತಿದ್ದ ಇವರು, ಪ್ರಸ್ತುತ ನಿವೃತ್ತಿಯ ನಂತರವೂ ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ತಮ್ಮ ತುಂಬಿದ ಕುಟುಂಬದ ಸದಸ್ಯರೊಂದಿಗೆ ತೋಟದಲ್ಲಿ ಸಸಿಗಳನ್ನು ನೆಟ್ಟು ಪ್ರಕೃತಿ ಪ್ರೇಮ ಮೆರೆದಿದ್ದಾರೆ.

​ಮಗುವಿನಂತಹ ಮನಸ್ಸು, ಗುಪ್ತ ದಾನಿ:-

ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ತಿಳಿಯಬಾರದು" ಎಂಬ ತತ್ವದಂತೆ ಬದುಕುತ್ತಿರುವ ಇವರು, ನೌಕರಿಯಲ್ಲಿದ್ದಾಗ ಕಷ್ಟದಲ್ಲಿದ್ದ ನೂರಾರು ಜನರಿಗೆ ಯಾರಿಗೂ ತಿಳಿಯದಂತೆ ಸಹಾಯ ಹಸ್ತ ಚಾಚಿದ್ದಾರೆ. ಹಿರಿಯ ಜೀವಗಳಿಗೆ ನೆರವಾಗುತ್ತಾ, ಮಗುವಿನಂತಹ ನಿಷ್ಕಲ್ಮಶ ಮನಸ್ಸಿನಿಂದ ಬದುಕುತ್ತಿರುವ ಇವರ ಸರಳತೆಗೆ ಇಡೀ ಭಾಗದ ಜನರೇ ಸಾಕ್ಷಿಯಾಗಿದ್ದಾರೆ.
​ನಿವೃತ್ತಿಯ ನಂತರವೂ ಕೃಷಿ ಕಾಯಕದಲ್ಲಿ ಸಕ್ರಿಯರಾಗಿರುವ ಈ ಹಿರಿಯ ಚೇತನಕ್ಕೆ ಅವರ ಕುಟುಂಬಸ್ಥರು ಹಾಗೂ  ಸ್ನೇಹಿತರು ಆಪ್ತ ಬಾಂಧವರು ಸುತ್ತಮುತ್ತಲಿನ 15 ಹಳ್ಳಿಗಳ ಗ್ರಾಮಸ್ಥರು ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿ, ದೀರ್ಘಾಯುಷ್ಯ ಕರುಣಿಸಲಿ ಎಂದು ಹಾರೈಸಿದ್ದಾರೆ.


ತಾಲೂಕು -









ಸಂತೋಷ ವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್ 

Santoshvani Digital Daily News portal 

0 ಕಾಮೆಂಟ್‌ಗಳು