ಕರ್ನಾಟಕದ 17 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಲಭಿಸಿದೆ.

ಬೆಂಗಳೂರು: ಅಗಸ್ಟ್ 15ರಂದು ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ ಶುಭಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಾಗುವ ಪ್ರತಿಷ್ಠಿತ 'ರಾಷ್ಟ್ರಪತಿ ಪದಕ-2026' ಪ್ರಶಸ್ತಿಯನ್ನು ಘೋಷಿಸಿದೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಒಟ್ಟು 17 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಬಾರಿಯ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಪೊಲೀಸ್ ಪಡೆಯಲ್ಲಿ ಅತ್ಯಂತ ವಿಶಿಷ್ಟ ಹಾಗೂ ಸುದೀರ್ಘ ಸೇವೆ ಸಲ್ಲಿಸಿದ ಸಿಸಿಬಿಯ ಸಹಾಯಕ ಪೊಲೀಸ್ ಕಮಿಷನರ್ ಹೆಚ್.ಎನ್. ಧರ್ಮೇಂದ್ರ ಅವರಿಗೆ ಪ್ರತಿಷ್ಠಿತ 'ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ' ಗೌರವಕ್ಕೆ ಪಾತ್ರರಾಗಿದ್ದಾರೆ.

ಕರ್ನಾಟಕದ ಪೊಲೀಸ್ ಸೇವೆಯಲ್ಲಿ ಒಬ್ಬರಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಹಾಗೂ 17 ಮಂದಿಗೆ ಪೊಲೀಸ್ ಪದಕ ಫಾರ್ ಮೆರಿಟೋರಿಯಸ್ ಸರ್ವಿಸ್ ಲಭಿಸಿದೆ.
ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿರುವ ಪಟ್ಟಿಯ
ಪ್ರಕಾರ, ಕರ್ನಾಟಕದ ಪರವಾಗಿ ಧರ್ಮೇಂದ್ರ ಹುಚ್ಚ ನಂಜಪ್ಪ ಕಲ್ಲೇಗೌಡನಕೊಪ್ಪಲು, ಸಹಾಯಕ ಪೊಲೀಸ್ ಆಯುಕ್ತರಿಗೆ ವಿಶಿಷ್ಟ ಸೇವಾ ಪದಕ ದೊರೆತಿದೆ.

ಅದೇ ರೀತಿ ಸಾರಾ ಫಾತಿಮಾ, ಮಹದೇವ ಟಿ.. ಶಣ್ಮುಘ ವರ್ಮ ಕೆ., ಬಾವುದ್ದೀನ್ ರುಕ್ಕುದ್ದೀನ್ ಗಡೇಕರ್, ಪ್ರಮಾಣದ್ ಪಿ. ಘೋಡಕೆ ಮತ್ತು ಥಾಮಸ್ ಮ್ಯಾಥ್ಯ ಪಿ.ಎಂ. ಸೇರಿದಂತೆ 17 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ಲಾಘನೀಯ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಶ್ಲಾಘನೀಯ ಸೇವಾ ಪದಕ ಪುರಸ್ಕೃತರ ಪಟ್ಟಿ

ಸಾರಾ ಫಾತಿಮಾ - ಎಸ್ಪಿ, ರೈಲ್ವೇಸ್, ಬೆಂಗಳೂರು


ಥಾಮಸ್ ಮ್ಯಾಕ್ಯೂ – ಕಮಾಂಡೆಂಟ್, ಕೆ.ಎಸ್.ಆ‌ರ್.ಪಿ

ಮಹಾದೇವ್ ಎಸಿಪಿ, ಆಗ್ನೆಯ ಸಂಚಾರ ವಿಭಾಗ, ಬೆಂಗಳೂರು


ಪರಮಾನಂದ್ - ಡಿವೈಎಸ್ಪಿ, ಡಿ.ಎ.ಆರ್, ರಾಯಚೂರು 

ಷಣ್ಮುಗವರ್ಮ - ಪೊಲೀಸ್ ಇನ್ಸ್ ಪೆಕ್ಟರ್, ಪೊಲೀಸ್ ತರಬೇತಿ ಶಾಲೆ, ಮೈಸೂರು

ಭಾವುದ್ದೀನ್ ರುಕ್ಖುದ್ದೀನ್ ಪೊಲೀಸ್ ಇನ್ಸ್‌ ಪೆಕ್ಟರ್, ಮಾಳಮಾರುತಿ ಠಾಣೆ, ಬೆಳಗಾವಿ

ಗುರುಪ್ರಸಾದ್ ಗೋಪಾಲ್ ನಾಯಕ್ - ಇನ್ಸ್‌ಪೆಕ್ಟರ್, ಸಿ ಐ ಡಿ ನಯೀಂ – ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್, ರಾಜಭವನ ಶ್ರೀನಿವಾಸ - ಪಿ.ಎಸ್.ಐ, ಕೆ.ಪಿ. ಅಗ್ರಹಾರ ಠಾಣೆ, ಬೆಂಗಳೂರು 

 ಜ್ಞಾನದೇವ್ ನವಲ ತರಾಸೆ
ಮಹದೇವಸ್ವಾಮಿ – ಹೆಡ್ ಕಾನ್ ಟೇಬಲ್, ವಿಧಾನಸೌಧ ಭದ್ರತೆ ಮಾರಿಯಾ ಜೋಸೆಫ್ ದಿನೇಶ್
ಕುಮಾರ್ - ಹೆಡ್ ಕಾನ್‌ ಟೇಬಲ್, ಡಿ.ಸಿ.ಆರ್.ಇ, ಕೆಜಿಎಫ್


ಚಂದ್ರಶೇಖರ ಚಿಕ್ಕಣ್ಣನವರ್ - ಹೆಡ್ ಕಾನ್‌ಟೇಬಲ್, ಕೆ.ಎಸ್. ಆರ್.ಪಿ


ಅಬ್ದುಲ್ ಕಮಾಲ್ - ಹೆಡ್ ಕಾನ್ಸ್ ಟೇಬಲ್, ತರೀಕೆರೆ ಠಾಣೆ ನಾಗೇಶ್ ಮಚ್ಚಯ್ಯ - ಹೆಡ್ ಕಾನ್ಸ್‌ಟೇಬಲ್, ಡಿಸಿ ಮನೋಹರ್ ಪೊಲೀಸ್ ಕಾನ್ಸ್ ಟೇಬಲ್, ಹುಣಸೂರು ಠಾಣೆ.


















Santhoshvani Digital Daily News portal
ಸಂತೋಷವಾಣಿ ಡಿಜಿಟಲ್ ಡೈಲಿ ನ್ಯೂಸ್ ಪೋರ್ಟಲ್ 


0 ಕಾಮೆಂಟ್‌ಗಳು